ನಿಜಕ್ಕೂ ಜನತಂತ್ರದ ಹಬ್ಬ

ವ್ಯಕ್ತಿ ಪರಿಗಣಿಸಿ

ಈಗ ಕೆಲವು ಮೇಲ್ಜಾತಿಗಳನ್ನು ಹೊರತುಪಡಿಸಿದರೆ ಹಿಂದುಳಿದ ಮತ್ತು ದಲಿತ ಸಮುದಾಯದ ಮತದಾರರು ಯಾವೊಂದೂ ಪಕ್ಷದ ಮತಬ್ಯಾಂಕಾಗಿ ಉಳಿದಿಲ್ಲ. ವಿವೇಚನೆಯುಳ್ಳವರು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದಿಲ್ಲ. ಚುನಾವಣೆಯ ಸಮಯದಲ್ಲಿ ಅವರಿಗೆ ಬೇಕಾದ ವ್ಯಕ್ತಿಗೆ ಮತ ಹಾಕುತ್ತಾರೆ.

ಹಾಗಾಗಿ, ಪಕ್ಷವನ್ನು ಪರಿಗಣಿಸುವುದಕ್ಕಿಂತ ವ್ಯಕ್ತಿಯನ್ನು ಗಣನೆಗೆ ತೆಗೆದುಕೊಳ್ಳುವುದೇ ಹೆಚ್ಚಾಗಿ ಕಂಡು ಬರುತ್ತಿರುವುದು ಸತ್ಯ. ಇದೇ ರೀತಿ ಪ್ರತಿ ಮತದಾರರೂ ಪಕ್ಷಕ್ಕೆ ಮನ್ನಣೆ ನೀಡುವುದಕ್ಕಿಂತ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕು.

ಶಫಿಉಲ್ಲ ಎಸ್.ಎಚ್, ಹಿರೇಕುಂಬಳಗುಂಟೆ, ಕೂಡ್ಲಿಗಿ  

ನಿಜಕ್ಕೂ ಜನತಂತ್ರದ ಹಬ್ಬ
ಪ್ರಜಾಮತದಲ್ಲಿ ಪ್ರಕಟವಾಗುತ್ತಿರುವ ಲೇಖನಗಳು ಮಾಹಿತಿಪೂರ್ಣ ಹಾಗೂ ಮೌಲ್ಯಯುತವಾಗಿವೆ. ಬೇರೆಲ್ಲಾ ಪತ್ರಿಕೆಗಳು ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳು ಚುನಾವಣೆಯ ಸನ್ನಿವೇಶವನ್ನು ಮಹಾಯುದ್ಧ, ರಣಾಂಗಣ, ಸಮರ, ಜಿದ್ದಾಜಿದ್ದಿ ಇತ್ಯಾದಿ ಉದ್ರೇಕಕಾರಿ ಪದಪುಂಜಗಳಿಂದ ವರ್ಣಿಸುತ್ತಿರುವ ಸಂದರ್ಭದಲ್ಲಿ, ಪ್ರಜಾವಾಣಿಯು ಜನತಂತ್ರದ ಹಬ್ಬ ಎಂದು ಹೆಸರಿಟ್ಟಿರುವುದೇ ಚುನಾವಣೆ ಸನ್ನಿವೇಶಕ್ಕೆ ಒಂದು ಹೊಸ ಮೆರುಗು ನೀಡುತ್ತದೆ.
ಎನ್.ಎ.ರವೀಶ್, ಚಿತ್ರದುರ್ಗ

Back to Top